Big Bulletin | DK Shivakumar Supporters Demand 'Shivakumarotsava' | HR Ranganath | July 13, 2022

2022-07-13 9

ಚುನಾವಣಾ ಸನಿಹದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದ್ದ ಕಾಂಗ್ರೆಸ್ ನಾಯಕರು, ಸಿದ್ದರಾಮೋತ್ಸವದ ನೆಪದಲ್ಲಿ ಇಷ್ಟು ದಿನ ಒಳಗೊಳಗೆ ಇದ್ದ ಆಂತರಿಕ ಸಂಘರ್ಷವನ್ನು ಬಹಿರಂಗ ಮಾಡಿದ್ದಾರೆ. ಇಂದು ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ ವಿರೋಧಿ ಬಣದ ಬಹುತೇಕ ನಾಯಕರು ಗೈರಾಗಿದ್ದಾರೆ. ಕೆಲವರು ಭಾಗಿಯಾದ್ರೂ ವೇದಿಕೆ ಮೇಲೆಯೇ ಸಿದ್ದರಾಮಯ್ಯಗೆ ಟಾಂಗ್ ಕೊಡುವ ಕೆಲಸವನ್ನು ಬಹಿರಂಗವಾಗೇ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಸಭೆಗೆ ಆಹ್ವಾನ ಇದ್ದರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೋಗ್ಲಿಲ್ಲ. ಈ ಬಗ್ಗೆ ಡಿಕೆಶಿನಾ ಕೇಳಿದ್ದಕ್ಕೆ, ನಾನು ಪಾರ್ಟಿ ಪ್ರೆಸಿಡೆಂಟ್ ರೀ.. ಮಧ್ಯಾಹ್ನ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಬೇಕು. ಅಷ್ಟಕ್ಕೂ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ನಾನು ಗೆಸ್ಟ್.. ಎಂದಿದ್ದಾರೆ. ಈ ಮೂಲಕ ಆಹ್ವಾನ ಇದ್ರೂ ನಾನು ಹೋಗ್ತಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಇದಕ್ಕೆ ಕೂಡ್ಲೇ ಬಿಎಲ್ ಶಂಕರ್ ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಇನ್ನು, ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯರನ್ನು ಹೊಗಳುತ್ತಲೇ, ಅವರಿನ್ನೂ ನನಗೆ ಪೂರ್ಣವಾಗಿ ಅರ್ಥ ಆಗೇ ಇಲ್ಲ ಎಂದಿದ್ದಾರೆ. ಸಂಸದ ಡಿಕೆ ಸುರೇಶ್, ವೇದಿಕೆಯಲ್ಲೇ ಸಿದ್ದರಾಮೋತ್ಸವಕ್ಕೆ ಪರೋಕ್ಷ ಅಸಮಾಧಾನ ವ್ಯಕ್ಯಪಡಿಸಿದ್ದಾರೆ.

#publictv #bigbulletin #hrranganath

Free Traffic Exchange